ಸಿದ್ಧಗಂಗಾ ಶ್ರೀ ಗದ್ದುಗೆಗೆ  ಲಕ್ಷ ಬಿಲ್ವಾರ್ಚನೆ: ಮಠಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ

siddaganga shree bilvarchane

ಸಿದ್ಧಗಂಗಾ ಶ್ರೀ ಗದ್ದುಗೆಗೆ  ಲಕ್ಷ ಬಿಲ್ವಾರ್ಚನೆ:  ಮಠಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ

 

 

ಸಿದ್ಧಗಂಗಾ ಶ್ರೀ ಗದ್ದುಗೆಗೆ  ಲಕ್ಷ ಬಿಲ್ವಾರ್ಚನೆ:

ಮಠಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ

ವೀರಶೈವ,ಲಿಂಗಾಯಿತ ಮಹಾ ವೇದಿಕೆ ಮತ್ತು ವೀರಶೈವ,ಲಿಂಗಾಯಿತ ಯುವವೇದಿಕೆ ವತಿಯಿಂದ ನವೆಂಬರ್ 29ರ ಸೋಮವಾರ ಬೆಳಗ್ಗೆಯಿಂದ ಸಂಜೆಯವರಿಗೆ ಕಾರ್ತಿಕ ಮಾಸದ ಅಂಗವಾಗಿ ಲಿಂಗೈಕ್ಯ ಶ್ರೀಶಿವಕುಮಾರಸ್ವಾಮೀಜಿ ಯವರ ಗದ್ದುಗೆಗೆ  ಲಕ್ಷ ಬಿಲ್ವಾರ್ಚನೆ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಡಾ.ಶ್ರೀಶಿವಕುಮಾರ ಮಹಾ ಶಿವಯೋಗಿಗಳ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದ ಅಂಗವಾಗಿ ಬೆಳಗಿನ ಜಾವ 4 ಗಂಟೆಗೆ ರುದ್ರಾಭಿಷೇಕ,5:30ಕ್ಕೆ ಉದ್ಘಾಟನೆ ಮತ್ತು ಪುಷ್ಪ ಬಿಲ್ವಾರ್ಚನೆ ಹಾಗೂ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ಜೊತೆಗೆ ಗದ್ದುಗೆಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ನಡೆಯಲಿದೆ.

ಸೋಮವಾರ ಬೆಳಗ್ಗೆ 8 ಗಂಟೆಗೆ ಸುತ್ತೂರು ಶ್ರೀಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ,ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗಸ್ವಾಮಿಗಳು ಸೇರಿದಂತೆ ವಿವಿಧ ಹರಗುರು ಚರಮೂರ್ತಿಗಳು ಈ ಧಾರ್ಮಿಕ ಕೈಂಕರ್ಯವನ್ನು ನಡೆಸಿಕೊಡಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಬೃಹತ್ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ,ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಜೆ.ಸಿ.ಮಾಧುಸ್ವಾಮಿ,ಶಿಕ್ಷಣ ಸಚಿವರಾದ ಶ್ಬಿ.ಸಿ.ನಾಗೇಶ್,ತುಮಕೂರು ನಗರ ಕ್ಷೇತ್ರದ ಶಾಸಕರಾದ ಜೋತಿಗಣೇಶ್,ತುರುವೇಕೆರೆ ಶಾಸಕರಾದ ಶ್ಮಸಾಲೆ ಜಯರಾಮ್,ಮಾಜಿ ಸಚಿವರಾದ ಸೊಗಡು ಶಿವಣ್ಣ, ಭದ್ರಾವತಿಯ ಶಾಸಕರಾದ ಬಿ.ಕೆ.ಸಂಗಮೇಶ್ ಸೇರಿದಂತೆ ಜಿಲ್ಲೆಯ ಶಾಸಕರು, ಸ್ಥಳೀಯ ಸಂಸದರು, ಜನಪ್ರತಿ ನಿಧಿಗಳು,ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಚಲನಚಿತ್ರ ನಟರಾದ ಡಾರ್ಲಿಂಗ್ ಕೃಷ್ಣ,ಚಿತ್ರನಟಿ ಅದಿತಿ ಪ್ರಭುದೇವ್,ನಟ ಧರ್ಮಕೀರ್ತಿ, ವೀರಶೈವ,ಲಿಂಗಾಯಿತ ಮಹಾವೇದಿಕೆ ಮತ್ತು ವೀರಶೈವ,ಲಿಂಗಾಯಿತ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು,ರಾಜ್ಯ ಕಾರ್ಯದರ್ಶಿ ಪ್ರಪುಲ್ ಕುಮಾರ್,ತುಮಕೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಚಂಗಾವಿ ರವಿ, ಜಿಲ್ಲಾ ಗೌರವಾಧ್ಯಕ್ಷರಾದ ರುದ್ರೇಶ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಸವರಾಜು ಬಿ.ಜಿ.ಪಾಳ್ಯ,ಜಿಲ್ಲಾ ಉಪಾಧ್ಯಕ್ಷ ಮುನಿ ಬಸವರಾಜು,ಪುಷ್ಪರಾಜ್ ಹಾಗೂ ಜಿಲ್ಲಾ ವೇದಿಕೆಯ ಪದಾಧಿಕಾರಿಗಳಾದ ಡಿ.ರಾಜಕುಮಾರ್,ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ.